part ..3
ಕುರಾನನ್ನು ಬರೆದವರಾರು ?
ಪ್ರವಾದಿ ಮೊಹಮ್ಮದ್ [ ಸ ಆ ] ರವರ ಮೇಲೆ ಮಾನವ ಕುಲದ ಮಾರ್ಗದರ್ಶನಕ್ಕಾಗಿ ಅವತೀರ್ಣ ಗೊಂಡ ಈ ಅಲ್ಲಾಹನವಾಣಿ ಅಲ್ಲಾಹನ ಅಂತಿಮ ಸಂದೇಶವಾದ ಪವಿತ್ರ ಕುರಾನ್ ಅವರ ಮರಣದ ನಂತರ ಕೂಡಾ ಬಾಯಿಪಾಠದ ರೀತಿಯಲ್ಲೇ ಹರಡುತ್ತಿತ್ತು
ಇಸ್ಲಾಮ್ ಅರಬ್ ದೇಶಗಳನ್ನು ಬಿಟ್ಟು ಹೊರಭಾಗ ಗಳಿಗೆ ವಿಸ್ತಾರ ವಾಗುತ್ತಿರುವಾಗ ಕುರಾನಿನ ಒಂದು ಪ್ರತಿಯನ್ನು ಕ್ರೋಢೀಕರಿಸಿಡುವ ಪ್ರಸ್ತಾವ ಉಮರ್ [ ರ ಆ ] ನೀಡಿದಾಗ ಅಂದಿನ ಮೊದಲಿನ ಖಲೀಫಾ ಅಬೂಬಕರ್ ಸಿದ್ದಿಕ್ [ ರ ಆ ] ರವರು ಅದರ ಜವಾಬ್ದಾರಿಯನ್ನು ಬರಹದಲ್ಲಿಯೂ ನೆನಪಿನ ಶಕ್ತಿಯಲ್ಲೂ ಅತ್ಯುತ್ತಮರಾಗಿದ್ದ ಸಹಾಬಿ ಜೈದ್ ಬಿನ್ ಸಾಬಿತ್ [ ರ ಆ ] ಮೇಲ್ವಿಚಾರಣೆಯಲ್ಲಿ ಕುರಾನ್ ಬಾಯಿಪಾಠ ವಿದ್ದವರ ಒಂದು ಸಮಿತಿ ರಚಿಸಿ ಆಜ್ಞಾಪಿಸುತ್ತಾರೆ .
ಅದರಂತೆ ಮೊತ್ತ ಮೊದಲು ಕುರಾನನ್ನು ಬರಹ ರೂಪದಲ್ಲಿ ಒಂದೇ ಕಡೆ ಕ್ರೋಢೀ ಕರಿಸಲಾಗುತ್ತದೆ .
ನಂತರ ಮೂರನೇ ಖಲೀಫಾ ಉಸ್ಮಾನ್ ರವರ ಕಾಲದಲ್ಲಿ ಇಸ್ಲಾಮ್ ಬಹಳ ವಿಸ್ತರಿಸ ತೊಡಗಿದಾಗ ಅದರ ನಾಲ್ಕು ಪ್ರತಿಗಳನ್ನು ರಚಿಸಿ ನಾಲ್ಕು ಪ್ರಧಾನ ಗವರ್ನರ್ ಗಳ ವಶ ಕಳಿಸಿ ಕೊಡಲಾಗುತ್ತದೆ .
ಅದರ ನಂತರ ಇಸ್ಲಾಮ್ ಹರಡಿದಂತೆ ಬಾಯಿಪಾಠ ಮಾಡುವ ಕೇಂದ್ರಗಳು ಲೋಕದಾದ್ಯಂತ ನಿರ್ಮಿಸಲಾಗುತ್ತದೆ .
ಈ ಕುರಾನ್ ಬಾಯಿಪಾಠ ಮಾಡುವ ಉತ್ಸಾಹ ಮುಸ್ಲಿಮರ ಮನೆ ಮನೆ ಯಲ್ಲಿ ಈಗಲೂ ಮುಂದುವರಿಯುತ್ತಾ ಬಂದಿದೆ . [ಕಾಂಗ್ರೆಸಿನ ನೇತಾರ ಯು ಟಿ ಖಾದರ್ ರವರ ಮನೆಯಲ್ಲೂ ಒಂದು ಕುರಾನ್ ಬಾಯಿಪಾಠ ಮಾಡಿರುವ ಅವರ ಮಗಳಿದ್ದಾಳೆ ಎಂದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯ ವಾಗಿರುತ್ತದೆ .]
ಇಡೀ ಲೋಕದಲ್ಲಿಂದು ಕುರಾನ್ ಬಾಯಿಪಾಠಮಾಡಿದವರು ಎಲ್ಲಾ ಕುಟುಂಬಗಳಲ್ಲಿ ಒಬ್ಬರಿಬ್ಬರು ಇದ್ದಾರೆ .
ನನ್ನ ಕುಟುಂಬದಲ್ಲೂ ಮೂವರು ಇದ್ದಾರೆ ಅಲ್ಹಮ್ದುಲಿಲ್ಲಾಹ್ .
ನಾವು ಪುಸ್ತಕ ನೋಡಿ ಓದುವಾಗ ಮಾಡುತ್ತಿರುವ ಸಣ್ಣ ಸಣ್ಣ ತಪ್ಪುಗಳನ್ನು ಆವರು ನೋಡದೆ ತಿದ್ದುತ್ತಾರೆ .
ಅದಲ್ಲದೆ ಅಂದು ಮೊದಲ್ಗೊಂಡ ಬರಹ ರೂಪದಲ್ಲಿ ಮುಂದುವರಿದ ಕುರಾನ್ ಅದೆಷ್ಟೋ ಮುಸ್ಲಿಂ ದೇಶಗಳಲ್ಲೂ ಮುಂದುವರಿಯುತ್ತಲೇ ಇದೆ . ಸೌದಿ ಅರೇಬಿಯಾದಲ್ಲಂತೂ ಬರಿಯ ಕುರಾನ್ ಮುದ್ರಣಕ್ಕಾಗಿಯೇ ಒಂದು ಪ್ರೆಸ್ಸನ್ನೇ ನಿರ್ಮಿಸಲಾಗಿದೆ .
ಪ್ರವಾದಿಯವರಿಗೆ ಅವತೀರ್ಣ ಗೊಂಡ ಕುರಾನನ್ನು ಬರೆದವರು ಯಾರು ಎಂಬ ಪ್ರೆಶ್ನೆಗೆ ಇದಾಗಿದೆ ಉತ್ತರ
ಪ್ರವಾದಿಕಾಲದಲ್ಲಿ ಬಾಯಿಪಾಠ ಮಾಡಿದ್ದವರೇ ಅದನ್ನು ಬರಹ ರೂಪದಲ್ಲಿ ಕ್ರೋಢೀಕರಿಸಿ ಜಗತ್ತಿನ ಮುಂದೆ ಇಟ್ಟಿದ್ದರು .
ಆದರೆ ಈಗಲೂ ಕುರಾನನು ಮುದ್ರಿಸಿದರೆ ಅದು ಸರಿಯಾಗಿ ಮುದ್ರಣ ವಾಗಿದೆಯೋ ಇಲ್ಲವೋ ತಪ್ಪು ಪ್ರಿಂಟಾಗಿದೆಯೋ ಎಂಬುವುದನ್ನು ಪರಿಶೀಲಿಸುವುದು ಈ ಬಾಯಿಪಾಠ ಮಾಡಿದವರೇ .
.ಈ ಕಳೆದ ಶತಮಾನದಲ್ಲಿ ಇನ್ನು ಮುಂದುವರಿದು ಅದರ ಭಾವಾನುವಾದಗಳನ್ನು ಲೋಕದ ಎಲ್ಲಾ ಭಾಷೆಗಳಲ್ಲೂ ಮಾಡಲಾಗಿದೆ . ಕನ್ನಡ ದಲ್ಲಿ ಮೊತ್ತ ಮೊದಲು ಈ ಭಾವಾನುವಾದವನ್ನು ಮಾಡಿದವರು ನನ್ನ ತಂದೆಯವರಾದ
ಅಬುಲ್ ಗಫಾರ್ ಸುಳ್ಯ [ ಆ ರ ] ಹೇಳಲು ನನಗೆ ಬಹಳ ಸಂತೋಷ ವಾಗುತ್ತಿದೆ .
ಆದರೆ ಇಲ್ಲಿ ಕೆಲವು ಫೇಸ್ ಬುಕ್ ಗೆಳೆಯರು ಈ ಕುರಾನಿನ ಮೇಲೆ ಯಾವುದೇ ನಂಬಿಕೆ ಇಲ್ಲದೆ ಕುರಾನ್ ಹರುಡುತ್ತಿರುವ ರೀತಿಯನ್ನು ನೋಡಿ ಹತಾಶರಾಗಿ ಪರಚಿಕೊಳ್ಳುವವರಂತೆ ಕಂಡಾಗ .. ನಿನ್ನೆ ಬಂದ್ ಸಮಯ ರೈಲು ನಿಲ್ಲಿಸಲು ಅಡ್ಡ ನಿಂತು ಓಡಿ.... ಅದರ ಬರುವ ರಭಸವನ್ನು ನೋಡಿಯೇ ಚದರಿ ಹೋದವರ ನೆನಪಾಗುತ್ತದೆ.ಮತ್ತು ಬಹಳ ಬೇಸರ ವಾಗುತ್ತದೆ .
ವೆರಿ ಸೋರಿ .
ನಾವು ಒಪ್ಪುವುದಿಲ್ಲ ಎಂದು ಹೇಳಿ ಸುಮ್ಮನಿರುವುದು ಬಿಟ್ಟು ಈ ಸರ್ಕಸ್ ಮಾಡುವ ಅಗತ್ಯವಿದೆಯೇ ?
mmgs